ನಿರುದ್ಯೋಗಿಗಳಿಗೆ ಭತ್ಯೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲು : ಗೋವಾ ಜನತೆಗೆ ಅರವಿಂದ ಕೇಜ್ರಿವಾಲ್ ಭರವಸೆ

Update: 2021-09-21 08:42 GMT

ಹೊಸದಿಲ್ಲಿ: ಗೋವಾದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ತನ್ನ  ಪಕ್ಷವು ಆಡಳಿತಾರೂಢ ಬಿಜೆಪಿ ಹಾಗೂ  ಕಾಂಗ್ರೆಸ್ ಅನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂದಿರುವ ಆಪ್ ಅಧ್ಯಕ್ಷ ಅರವಿಂದ ಕೇಜ್ರಿವಾಲ್ 7 ಭರವಸೆಗಳನ್ನು ನೀಡಿದ್ದಾರೆ.

ಎಎಪಿ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರಗಳನ್ನು ನಿಲ್ಲಿಸುತ್ತದೆ ಹಾಗೂ  ರಾಜ್ಯದ ಯುವಜನರಿಗೆ ಸರಕಾರಿ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದರು.

ಪ್ರತಿ ಮನೆಯಿಂದ ಒಬ್ಬ ನಿರುದ್ಯೋಗಿ ಕೆಲಸ ಪಡೆಯುತ್ತಾನೆ ಹಾಗೂ  ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ರೂ. 3,000 ಭತ್ಯೆ ಸಿಗುತ್ತದೆ ಎಂದು ಅವರು ಹೇಳಿದರು.

ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್  ಈಗಾಗಲೇ ಉತ್ತರಾಖಂಡದ ಹಲ್ದ್ವಾನಿಗೆ ಭೇಟಿ ನೀಡಿದ್ದಾರೆ ಹಾಗೂ ಅಲ್ಲಿ ಕೂಡ  ಇದೇ ರೀತಿಯ ಭರವಸೆಗಳನ್ನು ನೀಡಿದ್ದಾರೆ.  

ರಾಜ್ಯದ 80 ಪ್ರತಿಶತ ಉದ್ಯೋಗಗಳನ್ನು ಗೋವಾದ ಸ್ಥಳೀಯರಿಗೆ ಮೀಸಲಿಡಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News