ಸಿಡಿಮದ್ದು ಸ್ಫೋಟ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ನೀಡಿದ ಝಮೀರ್ ಅಹ್ಮದ್

Update: 2021-09-25 11:47 GMT

ಬೆಂಗಳೂರು, ಸೆ.25: ಬೆಂಗಳೂರಿನ ತರಗುಪೇಟೆಯಲ್ಲಿ ಗುರುವಾರ ಸಂಭವಿಸಿದ ಸಿಡಿಮದ್ದು ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನ್ಬುಸ್ವಾಮಿ(75) ಶನಿವಾರ ನಿಧನರಾಗಿದ್ದು, ಈ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಮಾವಳ್ಳಿಯಲ್ಲಿರುವ ಅನ್ಬುಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಝಮೀರ್ ಅಹ್ಮದ್ ಖಾನ್, ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು. ಇದೇ ಪ್ರಕರಣದಲ್ಲಿ ಮೃತಪಟ್ಟ ಮನೋಹರ್ ಹಾಗೂ ಅಸ್ಲಂ ಅವರ ಕುಟುಂಬಗಳಿಗೂ ಅವರು ತಲಾ ಎರಡು ಲಕ್ಷ ರೂ.ಗಳ ಪರಿಹಾರ ನೀಡಿದ್ದರು.

ಇಂತಹ ಘಟನೆ ಸಂಭವಿಸಿದ್ದು ದುರಾದೃಷ್ಟ. ಮೃತಪಟ್ಟವರೆಲ್ಲ ಬಡ ಕುಟುಂಬದವರು ವೈಯಕ್ತಿಕವಾಗಿ ನಾನು ನನ್ನಿಂದ ಸಾಧ್ಯವಾದ ನೆರವು ನೀಡಿದ್ದೇನೆ. ರಾಜ್ಯ ಸರಕಾರವು ಈ ಬಡ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ನೀಡುವ ಮೂಲಕ ಬಡವರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News