ಸೋಮವಾರ ಭಾರತ್ ಬಂದ್ ಹಿನ್ನೆಲೆ: ನಗರದೆಲ್ಲೆಡೆ ಸೂಕ್ತ ಭದ್ರತೆ: ಕಮಲ್ ಪಂತ್

Update: 2021-09-25 13:07 GMT

ಬೆಂಗಳೂರು, ಸೆ.25: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಶಾಂತಿ ಭಂಗ ಉಂಟಾಗದಂತೆ ಮುಂಜಾಗ್ರತೆಗಾಗಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.

ಬಂದ್ ವೇಳೆ ನಗರಕ್ಕೆ ಹೊರಗಿನಿಂದ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಬೇಕು. ಯಾವುದೇ ರೀತಿ ಗೊಂದಲಗಳು, ಗಲಾಟೆಗಳಿಗೆ ಅವಕಾಶ ಕೊಡಬಾರದು. ಗಸ್ತು ಹೆಚ್ಚಳ ಮಾಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸುವುದೇ ಸೇರಿದಂತೆ ತಮ್ಮ ವಿಭಾಗಗಳಲ್ಲಿ ಬಂದೋಬಸ್ತ್ ಮೇಲೆ ಆಯಾ ವಿಭಾಗದ ಡಿಸಿಪಿಗಳೇ ನಿಗಾವಹಿಸಿ ನಿರ್ವಹಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News