ಒಂದು ಹನಿ ನೀರು ವ್ಯರ್ಥವಾಗದಂತೆ ಮುತುವರ್ಜಿವಹಿಸಿ: ಜಲತಜ್ಞ ಆಬಿದ್ ಸುರ್ತಿ ಕರೆ

Update: 2022-03-22 18:00 GMT

ಬೆಂಗಳೂರು, ಮಾ. 22: ಒಂದು ಹನಿ ನೀರು ವ್ಯರ್ಥವಾಗದಂತೆ ಮುತುವರ್ಜಿವಹಿಸಿ, ಮುಂದಿನ ಪೀಳಿಗೆಗೆ ಶುದ್ಧ ಜಲ ದೊರೆಯುವುದನ್ನ ಖಾತರಿಪಡಿಸಿಕೊಳ್ಳುವಂತೆ ಖ್ಯಾತ ಜಲ ತಜ್ಞ ಹಾಗೂ ವಾಟರ್ ವಾರಿಯರ್ ಆಬಿದ್ ಸುರ್ತಿ ಕರೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿಶ್ವದ ಹೆಸರಾಂತ ಬಾತ್ ರೂಂ ಮತ್ತು ಕಿಚನ್ ಫಿಟ್ಟಿಂಗ್ಸ್ ಕಂಪೆನಿಯಾಗಿರುವ GROHE ನೀರು ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಹನಿಯೂ ಅಮೂಲ್ಯ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಒನ್ ಮ್ಯಾನ್ ಎನ್‍ಜಿಓ ಆಗಿ ನಾನು ಕಳೆದೊಂದು ದಶಕದಲ್ಲಿ ಸುಮಾರು 20 ದಶಲಕ್ಷ ಲೀಟರ್ ನೀರು ಪೋಲಾಗುವುದನ್ನ ತಪ್ಪಿಸಿದ್ದೇನೆ. ದೇಶದಲ್ಲಿ ಹಸಿರು ಕಟ್ಟಡ ಮಾರ್ಗಸೂಚಿಗಳು, ನೀರು ಮರುಬಳಕೆ, ಮಳೆ ನೀರು ಕೊಯ್ಲು ಮತ್ತು ಇತರೆ ದೊಡ್ಡ ಮಟ್ಟದ ಯೋಜನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾದ ನಾವು ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಡೆಯುವುದಕ್ಕೆ ಏನು ಮಾಡಬೇಕು? ಅಧ್ಯಯನಗಳ ಪ್ರಕಾರ, ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ಸೋರಿಕೆಯಾದರೆ ವರ್ಷಕ್ಕೆ 7800 ಲೀಟರ್‍ಗಿಂತ ಅಧಿಕ ನೀರು ವ್ಯರ್ಥವಾಗುತ್ತದೆ! ವಿಶೇಷವಾಗಿ ದೇಶದಲ್ಲಿ ಹೆಚ್ಚು ಭಾಗಗಳಲ್ಲಿ ನೀರು ಸಮರ್ಪಕವಾಗಿ ದೊರೆಯದೇ ಇರುವ ಸಂದರ್ಭದಲ್ಲಿ ಇದೊಂದು ದೊಡ್ಡ ನಷ್ಟವಾದಂತೆ ಎಂದು ಹೇಳಿದರು.

ಮಿಲಿಯನ್‍ಗಟ್ಟಲೆ ಮನೆಗಳಲ್ಲಿ ನೀರು ಸೋರಿಕೆಯಿಂದ ವರ್ಷಕ್ಕೆ ಬಿಲಿಯನ್ ಲೀಟರ್ ಗಟ್ಟಲೆ ನೀರು ವ್ಯರ್ಥವಾಗುತ್ತಿದೆ. ಇದು ಪರಿಹರಿಸಬಹುದಾದ ಸರಳ ಸಮಸ್ಯೆಯಾಗಿದೆ. ಆದಾಗ್ಯೂ, ಅರಿವಿನ ಕೊರತೆಯಿಂದಾಗಿ ಜನರು ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ ಅಥವಾ ಆಸಕ್ತಿಯನ್ನು ತೋರಿಸುತ್ತಿಲ್ಲ. ನಾವೆಲ್ಲರೂ ಗಮನಹರಿಸಿ ಕ್ರಮ ಕೈಗೊಂಡರೆ ನಾವು ಪ್ರತಿ ವರ್ಷ ಎಷ್ಟು ನೀರನ್ನು ಉಳಿಸಬಹುದು ಎಂಬುದನ್ನು ಊಹಿಸಿ. ಈ ಹಿನ್ನಲೆಯಲ್ಲಿ ಒಂದು ಹನಿಯೂ ವ್ಯರ್ಥವಾಗಿ ಪೋಲಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಕರೆ ನೀಡಿದರು.

ಜಾಗೃತಿ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಾಯಕ ಬಾಬಿ ಜೋಸೆಫ್ ಅವರು, ಈ ಅಭಿಯಾನದ ಮೂಲಕ ನಾವು ಕನಿಷ್ಠ 1 ಲಕ್ಷ ಜನರು ನೀರು ಸೋರಿಕೆ ತಡೆಯಲು ಮತ್ತು ನೀರನ್ನು ಉಳಿಸುವ ಪ್ರತಿಜ್ಞೆ ಮಾಡಲು ಸ್ಫೂರ್ತಿ ತುಂಬುವ ಉದ್ದೇಶವನ್ನು ಹೊಂದಲಾಗಿದೆ. ನಾವು ಈ ಒಂದು ಮಹತ್ವದ ಕಾರ್ಯಕ್ಕೆ ಬದ್ಧತೆಯನ್ನು ತೋರಿದರೆ ಕೇವಲ ಒಂದು ವರ್ಷದಲ್ಲಿ ಮಿಲಿಯನ್‍ಗಟ್ಟಲೆ ನೀರನ್ನು ಉಳಿಸಬಹುದಾಗಿದೆ! ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ನೀರು ಸೋರಿಕೆಯನ್ನು ಸರಿಪಡಿಸುವ ಸೊಸೈಟಿಗಳನ್ನು ಆಯ್ಕೆ ಮಾಡಲು ನಾವು ಪ್ಲಂಬರ್‍ಗಳ ಬೆಂಬಲವನ್ನು ಪಡೆಯಲಾಗುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News