ಶಿರ್ವ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಯ ನೆಕ್ಲೇಸ್ ಕಳವು

Update: 2022-06-10 15:37 GMT

ಶಿರ್ವ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಗೆ ಬಂದ ಇಬ್ಬರು ಅಪರಿಚಿತರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಶಿರ್ವದಲ್ಲಿ ನಡೆದಿದೆ.

ಕುತ್ಯಾರಿನ ಕೆ. ವಿವೇಕಾನಂದ ಆಚಾರ್ಯ ಎಂಬವರ ಶಿರ್ವ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್‌ಗೆ ಜೂ.6ರಂದು ಇಬ್ಬರು ಅಪರಿಚಿತರು ಚಿನ್ನವನ್ನು ಖರೀದಿ ಮಾಡುವ ನೆಪದಲ್ಲಿ ಬಂದಿದ್ದರು. ಇವರು ಮಲಯಾಳ ಮತ್ತು ತಮಿಳು ಭಾಷೆ ಮಾತನಾಡುತ್ತಿದ್ದರು. ಅಂಗಡಿಯ ಕೆಲಸದವರಿಗೆ ತಿಳಿಯದಂತೆ ಇವರು ಟ್ರೇ ಯಲ್ಲಿದ್ದ 1,49,000ರೂ. ಮೌಲ್ಯದ 28.799 ಗ್ರಾಂ ಚಿನ್ನದ ನೆಕ್ಲೇಸನ್ನು ಕಿಸೆಯೊಳಗೆ ಹಾಕಿ ಕಳವು ಮಾಡಿಕೊಂಡಿದ್ದಾರೆ.

ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಜೂ.9ರಂದು ಪರಿಶೀಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News