ಕಾಪು: ಮೃತದೇಹವನ್ನು ನೆರೆಯ ನೀರಿನಲ್ಲೇ ಅರ್ಧ ಕಿ.ಮೀ. ಹೊತ್ತೊಯ್ದರು!

Update: 2022-07-02 16:21 GMT

ಕಾಪು: ನೆರೆಯಿಂದಾಗಿ ಅಂಬ್ಯುಲೆನ್ಸ್ ಬರಲು ಸಾಧ್ಯವಾಗದ ಕಾರಣ ಮೃತದೇಹವನ್ನು ಸುಮಾರು ಅರ್ಧ ಕಿ.ಮೀ. ನೀರಿನಲ್ಲಿಯೇ ಹೊತ್ತುಕೊಂಡು ಹೋದ ಘಟನೆ ಕಾಪು ತಾಲೂಕಿನ ಕೋಟೆ ಗ್ರಾಪಂ ವ್ಯಾಪ್ತಿಯ ಮಟ್ಟು ದೇವರಕುದ್ರು ಎಂಬಲ್ಲಿ ಶುಕ್ರವಾರ ನಡೆದಿದೆ.

ತೋಟದ ಮಧ್ಯೆ ಹಾದು ಹೋಗಿರುವ ದೇವರಕುದ್ರುವಿಗೆ ಹೋಗುವ ಸಂಪರ್ಕ ರಸ್ತೆಯು ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ  ಜಲಾವೃತಗೊಂಡಿತ್ತು. ಈ ಮಧ್ಯೆ ಮಟ್ಟು ಬೊಮ್ಮನ್ ತೋಟದ ರಾಮಪ್ಪ ಕುಂದರ್ ಪತ್ನಿ ಬೇಬಿ ಪೂಜಾರಿ ಮೃತಪಟ್ಟಿದ್ದು, ಅಂತಿಮ ಸಂಸ್ಕಾರಕ್ಕೆ ಮೃತದೇಹ ಕೊಂಡೊಯ್ಯಲು ಆಗಮಿಸಿದ ಅಂಬ್ಯುಲೆನ್ಸ್, ಮನೆಯವರೆಗೆ ಬರಲು ಸಾಧ್ಯ ವಾಗದೆ ಅರ್ಧ ಕಿ.ಮೀ. ದೂರದಲ್ಲಿಯೇ ನಿಂತಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ.ವರೆಗೆ ನೆರೆಯ ನೀರಿನಲ್ಲಿಯೇ ಹೊತ್ತುಕೊಂಡು ಹೋಗಿ ಬಳಿಕ ಅಂಬ್ಯುಲೆನ್ಸ್ ಮೂಲಕ ಕೋಟೆ ಗ್ರಾಪಂನ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News