ಮರವಂತೆ ಸಮುದ್ರಕ್ಕೆ ಬಿದ್ದ ಕಾರು: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2022-07-04 11:40 GMT
ರೋಶನ್ ಆಚಾರ್ಯ - ಮೃತ ಯುವಕ 

ಕುಂದಾಪುರ, ಜು.4: ಮರವಂತೆಯಲ್ಲಿ ರವಿವಾರ ನಸುಕಿನ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ ಸಮುದ್ರ ಪಾಲಾಗಿದ್ದ ರೋಶನ್ ಆಚಾರ್ಯ(23) ಎಂಬವರ ಮೃತದೇಹವು ಇಂದು ಸಂಜೆ ತ್ರಾಸಿಯ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.

ಕಾರು ಹೆದ್ದಾರಿಯಿಂದ ಪಲ್ಟಿಯಾಗಿ ಸಮುದ್ರಕ್ಕೆ ಬೀಳುವ ಸಂದರ್ಭ ರೋಶನ್ ಆಚಾರ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ್ಕಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಅವರಿಗಾಗಿ ರವಿವಾರ ಬೆಳಿಗ್ಗೆನಿಂದ ವ್ಯಾಪಕ ಶೋಧ ನಡೆಸಿ ರಾತ್ರಿ ಶೋಧ ನಿಲ್ಲಿಸಲಾಗಿತ್ತು. ಸೋಮವಾರವೂ ರೋಶನ್ ಪತ್ತೆಗೆ ವ್ಯಾಪಕ ವಾಗಿ ಹುಡುಕಾಟ ಮುಂದುವರೆಸಲಾಗಿತ್ತು.

 ಮುಳುಗು ತಜ್ಞ ಈಶ್ವರ್ ಮಲ್ಪೆಅವರನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಕುಂದಾಪುರ ಡಿವೈಎಸ್ಪಿಶ್ರೀಕಾಂತ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ವಿನಯ್ ಕುಮಾರ್ ಹಾಜರಿದ್ದರು. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಬೀಜಾಡಿ ವಿರಾಜ್ ಆಚಾರ್ಯ ಮೃತಪಟ್ಟು, ಉಳಿದ ಇಬ್ಬರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News