ಸುಳ್ಯ | ಭೂಕಂಪನದಿಂದ ಹಾನಿಗೀಡಾದ ಮನೆಗೆ ಸಚಿವರ ಭೇಟಿ: 45 ಸಾವಿರ ರೂ.ನ ಚೆಕ್ ವಿತರಣೆ

Update: 2022-07-07 11:17 GMT

ಮಂಗಳೂರು, ಜು.7: ಕೆಲದಿನಗಳ ಹಿಂದೆ ಭೂಕಂಪನದಿಂದ ಹಾನಿಗೊಳಪಟ್ಟ ಸುಳ್ಯ ತಾಲೂಕಿನ ವಸಂತ ಭಟ್ ಎಂಬವರ ಮನೆಗೆ ಕಂದಾಯ ಸಚಿವ  ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್,  ಮತ್ತು ಮೀನುಗಾರಿಕೆ  ಸಚಿವ  ಎಸ್.ಅಂಗಾರ ಗುರುವಾರ ಭೇಟಿ ನೀಡಿದರು.

ಈ ವೇಳೆ ಕಂದಾಯ ಸಚಿವ ಅಶೋಕ್ 45 ಸಾವಿರ ರೂ.ನ ಚೆಕ್ ವಿತರಿಸಿದ್ದಲ್ಲದೆ, 5 ಲಕ್ಷ ರೂ.ಗಳ ಪರಿಹಾರ ಒದಗಿಸುವ ಭರವಸೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News