ಬೆಂಗಳೂರು: ಹಣ್ಣು ಮಳಿಗೆ ಮೇಲೆ ದುಷ್ಕರ್ಮಿಗಳಿಂದ ದಾಂಧಲೆ

Update: 2022-07-24 16:58 GMT

ಬೆಂಗಳೂರು, ಜು.24: ಇಲ್ಲಿನ ಕಾಕ್ಸ್‍ಟೌನ್‍ನಲ್ಲಿರುವ ತರಕಾರಿ, ಹಣ್ಣುಗಳ ಮಳಿಗೆ ಮೇಲೆ ದುಷ್ಕರ್ಮಿಗಳ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ರವಿವಾರ ನಗರದ ಕಾಕ್ಸ್‍ಟೌನ ಸುಂದರಮೂರ್ತಿ ರಸ್ತೆಯಲ್ಲಿರುವ ಫ್ರೆಶ್ ವಲ್ರ್ಡ್ ಮಳಿಗೆ ಮೇಲೆ ಹತ್ತಕ್ಕೂ ಅಧಿಕ ಮಂದಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ದಾಂಧಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಮಳಿಗೆ ಸಿಬ್ಬಂದಿ, ಏಕಾಏಕಿ ಇಂದು ಸ್ಥಳೀಯರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವನಿಗೆ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜತೆಗೆ, ಮಳಿಗೆಯಲ್ಲಿದ್ದ ನಗದು ಕಳವು ಮಾಡಲಾಗಿದೆ. ಹಲವು ವಸ್ತುಗಳಿಗೂ ಹಾನಿಯಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ, ತ್ವರಿತವಾಗಿ ಸ್ಪಂದಿಸಲಿಲ್ಲ. ಆ ನಂತರ ಠಾಣೆಗೆ ತೆರಳಿ ದೂರು ನೀಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News