ಮೂಡುಬಿದಿರೆ: ನೋಟರಿ ಚೇತನ್ ವರ್ಮ ನಿಧನ

Update: 2022-07-31 16:28 GMT

ಮೂಡುಬಿದಿರೆ, ಜು.31: ನೋಟರಿ, ವಕೀಲ ಚೇತನ್ ವರ್ಮ ಮೂಡುಬಿದಿರೆ (56) ರವಿವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಶಿರ್ತಾಡಿಯವರಾದ ಅವರು ಕೆಲವು ವರ್ಷಗಳಿಂದ ಅಲಂಗಾರು ನಿವಾಸಿಯಾಗಿದ್ದರು. ವಕೀಲರಾಗಿ ಸುಮಾರು 25 ವರ್ಷ ಸೇವೆ ಸಲ್ಲಿಸಿದ್ದಾರೆ. ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಸಂತಾಪ: ಚೇತನ್ ವರ್ಮ ನಿಧನಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸುದರ್ಶನ, ಹಾಸ್ಕೋ ಹಾಜಿ, ವಿಜಯ್ ಲೂವಿಸ್, ಅಬುಲ್ ಅಲಾ ಪುತ್ತಿಗೆ, ನೌಶಾದ್ ಹಾಜಿ, ಸತೀಶ್ಚಂದ್ರ ಸಾಲ್ಯಾನ್, ಮಾಧವ ಪ್ರಭು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News