ಶಿವಮೊಗ್ಗದಲ್ಲಿ ಚೂರಿ ಇರಿತ ಹಿನ್ನೆಲೆ; ಸುರತ್ಕಲ್ ಪೇಟೆಯಲ್ಲಿ ಪೊಲೀಸರಿಂದ ವಾಹನ ತಪಾಸಣೆ

Update: 2022-08-15 15:07 GMT

ಸುರತ್ಕಲ್, ಆ.15: ಶಿವಮೊಗ್ಗದಲ್ಲಿ ಇಂದು ನಡೆದ ಅವಳಿ ಚೂರಿ ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಸುರತ್ಕಲ್ ಪೇಟೆಯಲ್ಲಿ ಪೊಲೀಸರು ವಾಹನ ತಪಾಸಣೆ ಕೈಗೊಂಡಿದ್ದಾರೆ.

ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಸಂಪೂರ್ಣ ತಪಾಸಣೆ ಮಾಡಿದ ಬಳಿಕವೆ ಕಾಟಿಪಳ್ಳ, ಕೃಷ್ಣಾಪುರದತ್ತ ಬಿಡಲಾಗುತ್ತಿದೆ.

ಸದ್ಯ ಸುರತ್ಕಲ್ ಪೊಲೀಸ್ ನಿರೀಕ್ಷಕ ಚಂದಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುರತ್ಕಲ್ ಠಾಣೆಯ ಪೊಲೀಸರು ಸಹಿತ ಕೆಎಸ್ಆರ್‌ಪಿ ತುಕಡಿಯ ಪೊಲೀಸರು ಸೇರಿ 25ಕ್ಕೂ ಹೆಚ್ಚಿನ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News