ʼತಾಂತ್ರಿಕನ ಸಲಹೆ ಆಧರಿಸಿ ಪಕ್ಷದ ಹೆಸರು ಬದಲಿಸಿದ ಕೆಸಿಆರ್ʼ: ನಿರ್ಮಲಾ ವ್ಯಂಗ್ಯ
Update: 2022-10-08 17:45 GMT
ಹೊಸದಿಲ್ಲಿ,ಅ.8: ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್.ಚಂದ್ರಶೇಖರ್ ತಾಂತ್ರಿಕನೊಬ್ಬನ ಸಲಹೆಯ ಆಧಾರದಲ್ಲಿ ಹೊಸ ರಾಷ್ಟ್ರೀಯ ಪಕ್ಷವನ್ನು ಸ್ಥಾಪಿಸಿದ್ದಾರೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಗುರಿಯೊಂದಿಗೆ ಬುಧವಾರದಂದು ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಪಕ್ಷವು ತನ್ನ ಹೆಸರನ್ನು ಭಾರತ ರಾಷ್ಟ್ರ ಸಮಿತಿ ( ಬಿಆರ್ಎಸ್) ಎಂದು ಬದಲಾಯಿಸಿಕೊಂಡಿದೆ.
ಮಂತ್ರತಂತ್ರ ಹಾಗೂ ಸಂಖ್ಯಾಶಾಸ್ತ್ರವನ್ನು ನಂಬುವ ಕೆಸಿಆರ್ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಾಂತ್ರಿಕನ ಮಾತು ಕೇಳಿ ಸಚಿವಾಲಯಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆಂದು ಅವರು ವ್ಯಂಗ್ಯವಾಡಿದ್ದಾರೆ.