ಸೌಕೂರು: ಕುಬ್ಜಾ ನದಿದಂಡೆ ಕಾಮಗಾರಿಗೆ ಚಾಲನೆ

Update: 2022-12-04 13:10 GMT

ಕುಂದಾಪುರ, ಉಡುಪಿ, ಡಿ.4: : ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾಪಂ ವ್ಯಾಪ್ತಿಯ ಸೌಕೂರು ಕುಚ್ಚಟ್ಟು ಎಂಬಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಕುಬ್ಜಾ ನದಿಗೆ ನದಿದಂಡೆ ಸಂರಕ್ಷಣಾ ಅಭಿವೃದ್ಧಿ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.

ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 2700 ಕೋಟಿಗೂ ಮಿಕ್ಕಿ ಅನುದಾನ ಬಂದಿದ್ದು,  ಕ್ಷೇತ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಗುಲ್ವಾಡಿ ಗ್ರಾಪಂ ವ್ಯಾಪ್ತಿಗೂ ಸುಮಾರು 16 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಸುರೇಂದ್ರ ಗುಲ್ವಾಡಿ, ರಾಮಕೃಷ್ಣ ಹೆಬ್ಬಾರ್, ಮಂಜುಳಾ, ಸಂಜೀವಿ ಆಚಾರ್, ಸ್ಥಳೀಯ ಪ್ರಮುಖರಾದ ಪಿ.ಬಿ.ಆರ್.ಹೆಗ್ಡೆ, ದಿನೇಶ್ ಹೆಗ್ಡೆ, ಗೌತಮ್ ಶೆಟ್ಟಿ, ನಾರಾಯಣ್ ನಾಯ್ಕ್, ಶೇಖರ ಪೂಜಾರಿ ಗುಲ್ವಾಡಿ, ಕುಪ್ಪ ಸೌಕೂರು,  ಗುತ್ತಿಗೆದಾರ ಸುನೀತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಗುಲ್ವಾಡಿ ಗ್ರಾಪಂ ಸದಸ್ಯ ಸುರೇಂದ್ರ ಗುಲ್ವಾಡಿ ಸ್ವಾಗತಿಸಿ, ವಂದಿಸಿದರು.

Similar News