ಉಡುಪಿ: ಚಿತ್ರಕಲಾ ಸ್ಪರ್ಧೆಗಳ ವಿಜೇತರು

Update: 2022-12-05 13:44 GMT

ಉಡುಪಿ, ಡಿ.5: ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ  ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಆಯೋಜಿ ಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ.ಪೂ ಕಾಲೇಜು ಹಾಗೂ ಪದವಿ ಕಾಲೇಜು ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯ ನಿರ್ಣಾಯಕರಾಗಿ ದಾಮೋದರ ಆಚಾರ್ಯ, ಡಾ. ಜನಾರ್ದನ ಹಾವಂಜೆ ಹಾಗೂ ಪ್ರಸಾದ್ ರಾವ್ ಪಾಲ್ಗೊಂಡಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.

ವಿವಿಧ ವಿಭಾಗಗಳ ಬಹುಮಾನ ವಿಜೇತರ ವಿವರ

ಪೂರ್ವ ಪ್ರಾಥಮಿಕ ವಿಭಾಗ (1ನೇ ತರಗತಿಯಿಂದ 4ನೇ ತರಗತಿ): ಪ್ರಥಮ - ಅನ್ವಿತ ಶೆಟ್ಟಿಗಾರ್, ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆ ಉಡುಪಿ, ದ್ವಿತೀಯ- ತೇಜಸ್ವಿ, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ ಉಡುಪಿ, ತೃತೀಯ-ಪಾವನಿ ಜಿ. ರಾವ್, ಅನಂತೇಶ್ವರ ಹಿ.ಪ್ರಾ.ಶಾಲೆ, ಉಡುಪಿ. ಸಮಾಧಾನಕರ:ನಿಹಾರ್ ಜೆ.ಎಸ್. ಜಿ.ಎಂ.ಆಂಗ್ಲಮಾಧ್ಯಮಶಾಲೆ, ಬ್ರಹ್ಮಾವರ.

ಪ್ರಾಥಮಿಕ ವಿಭಾಗ (5ರಿಂದ-7ನೇ ತರಗತಿ): ದೃತಿ ಎಸ್., ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ (ಪ್ರ), ಹನ್ಸಿಕ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ (ದ್ವಿ), ವಿನೀಶ್ ಆಚಾರ್ಯ, ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ (ತೃ), ಸಮಾಧಾನಕರ -ಚಿರಾಗ್ ವಿ. ಶೆಟ್ಟಿ, ಮುಕುಂದಕೃಪಾ ಆಂಗ್ಲ ಮಾಧ್ಯಮ ಶಾಲೆ ಉಡುಪಿ.

ಪ್ರೌಢ ವಿಭಾಗ (8ರಿಂದ 10ನೇ ತರಗತಿ): ಪ್ರತಿಷ್ಟ ಶೇಟ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ (ಪ್ರ), ದೀಪಿಕಾ ಭಟ್, ಸೈಂಟ್ ಸಿಸಿಲಿ ಹಿ. ಪ್ರಾ. ಶಾಲೆ ಉಡುಪಿ (ದ್ವಿ), ಪರೀಕ್ಷಿತ್ ಆಚಾರ್, ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ (ತೃ), ಸಮಾಧಾನಕರ: ಮೇದಿನಿ ಭಟ್, ಮಾಧವಕೃಪಾ ಆಂಗ್ಲಮಾಧ್ಯಮ ಶಾಲೆ ಮಣಿಪಾಲ.

ಪದವಿ ಪೂರ್ವ ವಿಭಾಗ: ಆದರ್ಶ್ ಭಟ್, ಪಿಪಿಸಿ ಉಡುಪಿ (ಪ್ರ), ವಿಘ್ನೇಶ್ ಆರ್.ಜಿ., ಪಿಪಿಸಿ ಉಡುಪಿ (ದ್ವಿ), ಆಶ್ಲೇಷ್ ಆರ್. ಭಟ್., ಪಿಪಿಸಿ ಉಡುಪಿ (ತೃ), ಸಮಾಧಾನಕರ: ಗುರುರಾಜ ಎಂ. ಶೇಟ್, ಪಿಪಿಸಿ ಉಡುಪಿ.

ಪದವಿ ವಿದ್ಯಾರ್ಥಿಗಳ ವಿಭಾಗ: ಅಶ್ಮಿತಾ, ಎಂ.ಜಿ.ಎಂ ಕಾಲೇಜು ಉಡುಪಿ (ಪ್ರ), ಪವನ್, ಎಂ.ಪಿ.ಎಂ. ಸರಕಾರಿ ಕಾಲೇಜು ಕಾರ್ಕಳ (ದ್ವಿ), ಮೇಘನ ಎಸ್.ಎಸ್.,ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲ (ತೃ), ಸಮಾಧಾನಕರ:ಅಮಿತ್‌ರಾಜ್, ಮಹಾಲಸಾ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ಸ್ ಮಂಗಳೂರು.

Similar News