ನಾನು, ಸಿದ್ದರಾಮಯ್ಯ ಸ್ವಾರ್ಥಕ್ಕಾಗಿ ಕ್ಷೇತ್ರ ಬಿಟ್ಟಿದ್ದಲ್ಲ: ಸಚಿವ ಶ್ರೀರಾಮುಲು

''ಜನಪ್ರಿಯ ಅಭ್ಯರ್ಥಿಗಳು ಕೆಲವೊಮ್ಮೆ...''

Update: 2023-03-22 07:01 GMT

ಬಳ್ಳಾರಿ: 'ಅನಿವಾರ್ಯ ಕಾರಣಕ್ಕೆ ನಾನು ಮತ್ತು ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಕ್ಷೇತ್ರ ಬಿಡಬೇಕಾಯಿತು. ಅಲ್ಲದೇ, ಸ್ವಾರ್ಥಕ್ಕಾಗಿ ಕ್ಷೇತ್ರ ಬಿಟ್ಟಿದ್ದಲ್ಲ' ಎಂದು ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ''ಸಿದ್ದರಾಮಯ್ಯ ಅವರು ಎಲ್ಲಿಂದ ಸ್ಪರ್ಧಿಸಬೇಕು ಅನ್ನುವುದು ಅವರ ವೈಯಕ್ತಿಕ ವಿಚಾರ. ಈ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಪಕ್ಷ ನಿರ್ಧರಿಸುತ್ತದೆ. ನಮ್ಮ ಗುರಿ ಬಿಜೆಪಿ ಸರಕಾರ ಬರಬೇಕು ಕಾಂಗ್ರೆಸ್ ಸೋಲಬೇಕು'' ಎಂದರು.

'ಸರ್ಕಾರ ರಚನೆಗಾಗಿ ಜನಪ್ರಿಯ ಅಭ್ಯರ್ಥಿಗಳು ಕೆಲವೊಮ್ಮೆ ಬೇರೆಡೆ ನಿಲ್ಲಬೇಕಾಗುತ್ತೆ. ಇದು ಸಾಮಾನ್ಯ ಎಂದ ಅವರು, ನಾನು ಮತ್ತು ಸಿದ್ದರಾಮಯ್ಯ ನಮ್ಮ ಸ್ವಾರ್ಥಕ್ಕೆ ಕ್ಷೇತ್ರ ಬಿಟ್ಟಿದ್ದಲ್ಲ. ಸರ್ಕಾರದ ರಚನೆಗಾಗಿ ನಾವಿಬ್ಬರೂ ಕ್ಷೇತ್ರ ಬಿಟ್ಟಿದ್ದೇವೆ'' ಎಂದ ತಿಳಿಸಿದರು. 

ಇದನ್ನೂ ಓದಿ: ಚಿಂತೆ ಮಾಡಬೇಡಿ, ನಾನೇ ಮುಂದಿನ ಮುಖ್ಯಮಂತ್ರಿ ಎಂದ ಬಸವರಾಜ ಬೊಮ್ಮಾಯಿ 

''ಸಿದ್ದರಾಮಯ್ಯ ಅವರು ವರುಣಾದಲ್ಲೇ ಸ್ಪರ್ಧಿಸಬೇಕಿತ್ತು ಆದರೆ ಮಗನ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಕ್ಷೇತ್ರದತ್ತ ಹೋಗಬೇಕಾಗಿದೆ ಎಂದರು. ಕಳೆದ ಚುನಾವಣೆಯಲ್ಲಿ ನಾನು ಕೂಡ ಸಾಹಸ ಮಾಡಿದ್ದೆ, ಸಿದ್ದರಾಮಯ್ಯ ಅವರು ಕೂಡ ಸಾಹಸ ಮಾಡಿದ್ದರು'' ಎಂದರು.

Similar News