ಹನೂರು: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತ್ಯು
ಅಣ್ಣ-ತಮ್ಮ ದಸರಾ ರಜೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದ ವೇಳೆ ಘಟನೆ
Update: 2025-09-24 15:20 IST
ಚಾಮರಾಜನಗರ: ಶಾಲೆಗೆ ದಸರಾ ರಜೆಯಿದ್ದ ಕಾರಣ ಅಜ್ಜಿ ಮನೆಗೆ ಬಂದಿದ್ದ ಅಣ್ಣ-ತಮ್ಮ ನೀರು ತುಂಬಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹನೂರು ತಾಲೂಕಿನ ಆರ್.ಎಸ್.ದೊಡ್ಡಿಯ ನಿವಾಸಿ ಕುಮಾರಸ್ವಾಮಿ ಎಂಬವರ ಪುತ್ರರಾದ ಯೋಗೇಶ್(9) ಮತ್ತು ಸಂಜಯ್(4) ಮೃತಪಟ್ಟ ಬಾಲಕರು.
ದಸರಾ ರಜೆ ನಿಮಿತ್ತ ಬಾಲಕರು ಕುರುಬರ ದೊಡ್ಡಿ ಗ್ರಾಮದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದರು. ಅಲ್ಲಿ ಜಮೀನಿನಲ್ಲಿ ನೀರು ತುಂಬಿದ ಕೃಷಿ ಹೊಂಡ ಬಳಿ ತೆರಳಿದಾಗ ಆಯಾತಪ್ಪಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.