ಸುರೇಂದ್ರ ಕೋಲಿ (File Photo)

ಹರಿದ್ವಾರ: 2006ರ ನಿಥಾರಿ ಸರಣಿ ಕೊಲೆಗಳ ಆರೋಪಿ ಸುರೇಂದ್ರ ಕೋಲಿ ಶುಕ್ರವಾರ ಹರಿದ್ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು CNN-News18 ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುರೇಂದ್ರ ಕೋಲಿ ಉತ್ತರ ಹರಿದ್ವಾರದ ಭುಪತ್ವಾಲ್ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುರೇಂದ್ರ ಕೋಲಿಯ ವಿರುದ್ಧ ದಾಖಲಾಗಿದ್ದ ಕೊನೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆತನನ್ನು ಖುಲಾಸೆಗೊಳಿಸಿ, ಜೈಲಿನಿಂದ ಬಿಡುಗಡೆಗೊಳಿಸಿತ್ತು.

2006ರಲ್ಲಿ ನೋಯ್ಡಾ ಸೆಕ್ಟರ್–31ರ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಅವರ ಬಂಗಲೆಯ ಹಿತ್ತಲಿನಲ್ಲಿ ಹಾಗೂ ಸಮೀಪದ ಚರಂಡಿಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಅಸ್ಥಿಪಂಜರ ಅವಶೇಷಗಳು ಪತ್ತೆಯಾದ ಬಳಿಕ ನಿಥಾರಿ ಪ್ರಕರಣ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor