×
Ad

ಹಾಸನ | ರೌಡಿಶೀಟ‌ರ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2023-07-08 18:06 IST
ಬಂಧಿತ ಆರೋಪಿಗಳು (ಹತ್ಯೆಗೀಡಾದ ಮಾಸ್ತಿಗೌಡ-ಒಳ ಚಿತ್ರದಲ್ಲಿ)

ಚನ್ನರಾಯಪಟ್ಟಣ (ಹಾಸನ): ರೌಡಿಶೀಟ‌ರ್ ಮಾಸ್ತಿಗೌಡ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಜು.4 ರಂದು ಹಾಡ ಹಗಲೇ ಪಟ್ಟಣದ ಧನಲಕ್ಷ್ಮಿ ಚಿತ್ರ ಮಂದಿರದ ಎದುರಿನ ಬಿಎಂ ರಸ್ತೆಯಲ್ಲಿ ಮಾಸ್ತಿಗೌಡ (34)ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಘಟನೆ ನಂತರ ಎಲ್ಲಾ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮೂರು ತಂಡಗಳನ್ನು ರಚನೆ ಮಾಡಿದ್ದರು. 

ಖಚಿತ ಮಾಹಿತಿ ಮೇರೆಗೆ ಮಂಡ್ಯ ಶಿವು, ಉಲಿವಾಲ ಚೇತು ಮತ್ತು ಸಾಲಗಾಮೆ ರಾಕಿ ಎಂಬ ಮೂವರನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News