×
Ad

ಬಂಟ್ವಾಳ | ನುಸುರತ್ ಮಿಲಾದುನ್ನಭಿ ಸಂಘದ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿ ಅಂಗಡಿ ಆಯ್ಕೆ

Update: 2025-12-15 20:01 IST

ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಶಾಂತಿಅಂಗಡಿ ನುಸುರತ್ ಮಿಲಾದುನ್ನಭಿ ಸಂಘ (ರಿ) ಇದರ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿ ಅಂಗಡಿ ಆಯ್ಕೆಯಾಗಿದ್ದಾರೆ.

ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಮಜಲ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಎಸ್, ಕೋಶಧಿಕಾರಿಯಾಗಿ ಅಬೂಬಕ್ಕರ್ ಕರಾವಳಿ, ಉಪಾಧ್ಯಕ್ಷರಾಗಿ ಸಾಹುಲ್ ಅದ್ದೇಡಿ, ಸಾದಿಕ್ ತಾಳಿಪಡ್ಪು, ಜೊತೆ ಕಾರ್ಯದರ್ಶಿಗಳಾಗಿ ಆದಂ ಪಲ್ಲ, ಇಸ್ಮಾಯಿಲ್ ಪಲ್ಲ, ಲೆಕ್ಕ ಪರಿಶೋಧಕರಾಗಿ ಹಮೀದ್ ಪಲ್ಲ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ 12 ಮಂದಿಯನ್ನು ಆರಿಸಲಾಯಿತು. ಅಶ್ರಫ್ ಎಸ್ ಸ್ವಾಗತಿಸಿ, ಇಸ್ಮಾಯಿಲ್ ಪಲ್ಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News