ಮಂಗಳೂರು: ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ಗೆ ಸನ್ಮಾನ
Update: 2025-12-30 00:18 IST
ಮಂಗಳೂರು: ಬೆಂಗರೆ ಕಸಬಾ ಅಲ್ ಮದ್ರಸತುಲ್ ದೀನಿಯ್ಯಾ ಅಸೋಸಿಯೇಶನ್ ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ಸದ್ಯದಲ್ಲೇ ನಿವೃತ್ತರಾಗಲಿರುವ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ರನ್ನು ಬೆಂಗರೆ ಜಮಾಅತ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ವಕ್ಫ್ ಲೆಕ್ಕಪರಿಶೋಧಕ ಮುಸ್ತಫ, ಎಎಂಡಿ ವ್ಯವಸ್ಥಾಪಕ ನಿಸಾರ್ ಬೆಂಗರೆ, ಇಮ್ರಾನ್, ಶಾಹಿಕ್ ನಿಯಾಝ್ ಮತ್ತಿತರರು ಉಪಸ್ಥಿತರಿದ್ದರು.