×
Ad

ಉಳ್ಳಾಲ : ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ

Update: 2024-09-13 23:43 IST

ಉಳ್ಳಾಲ : ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಸೆ.13 ರಿಂದ 22 ವರೆಗೆ ಅಯೋಜಿಸಿದ್ದ ಸೀರತ್ ಅಭಿಯಾನ ದ ಪ್ರಯುಕ್ತ ಶಾಂತಿ ಪ್ರಕಾಶನ ಹೊರತಂದಿರುವ ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ ಸಮಾರಂಭವು ಮಸ್ಜುದುಲ್ ಹುದಾ ಮಸೀದಿಯಲ್ಲಿ ನಡೆಯಿತು.

ಮಸ್ಜಿದುಲ್ ಹುದಾ ತೊಕ್ಕೊಟ್ಟು ವಿನ ಖತೀಬ್ ಮೊಹಮ್ಮದ್ ಕುಂಞಿ ಪುಸ್ತಕ ವನ್ನು ಬಿಡುಗಡೆ ಮಾಡಿ ವಿಚಾರ ಮಂಡಿಸಿದರು. ವುಡ್ ಲ್ಯಾಂಡ್ ಪ್ಲೈವುಡ್ ಮಾಲಕ ಎ.ಎಚ್.ಮೆಹಮೂದ್ , ಉದ್ಯಮಿ ಮೆಹಫೂಝ್ ರಹ್ಮಾನ್, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಮಸ್ಜಿದುಲ್ ಹುದಾ ತೊಕ್ಕೊಟ್ಟು ಇದರ ಅಧ್ಯಕ್ಷ ಹಸನಬ್ಬ ಉಪಸ್ಥಿತರಿದ್ದರು.

ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಸಂಚಾಲಕ ನಿಝಾಮುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News