×
Ad

ಮಹಾರಾಷ್ಟ್ರ: ಬೈಕ್ ಗೆ ಕಾರು ಢಿಕ್ಕಿ ಗಸ್ತು ನಿರತ ಪೊಲೀಸ್ ಸಾವು

Update: 2024-07-08 22:00 IST

ಪುಣೆ : ಮಹಾರಾಷ್ಟ್ರದ ಪುಣೆ ನಗರದಲ್ಲಿ ವೇಗವಾಗಿ ಧಾವಿಸಿದ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನೆಲ್ಲಿದ್ದ ಒಬ್ಬರು ಪೊಲೀಸ್ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಘಟನೆ ಖಡ್ಕಿ ಪ್ರದೇಶದ ಹ್ಯಾರಿಸ್ ಸೇತುವೆಯ ಸಮೀಪ ರವಿವಾರ ತಡ ರಾತ್ರಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಹ್ಯಾರಿಸ್ ಸೇತುವೆಯ ಸಮೀಪ ಖಡ್ಕಿ ಪೊಲೀಸ್ ಠಾಣೆಯ ಬೀಟ್ ಮಾರ್ಷಲ್ ಗಳಾದ ಪಿ.ಸಿ. ಶಿಂಧೆ ಹಾಗೂ ಸಮಾಧಾನ್ ಕೋಲಿ ಗಸ್ತು ನಿರತರಾಗಿದ್ದರು. ಈ ಸಂದರ್ಭ ವೇಗವಾಗಿ ಧಾವಿಸಿದ ಅಪರಿಚಿತ ಕಾರೊಂದು ಅವರ ಬೈಕ್ಗೆ ಹಿಂದಿನಿಂದ ಢಿಕ್ಕಿಯಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘‘ಇದರಿಂದ ಇಬ್ಬರೂ ಕೆಳಗೆ ಬಿದ್ದರು. ಕೂಡಲೇ ಚಾಲಕ ಅಲ್ಲಿಂದ ಪರಾರಿಯಾದ. ಘಟನೆಯಲ್ಲಿ ಕೋಲಿ ಮೃತಪಟ್ಟಿದ್ದಾರೆ. ಶಿಂಧೆ ಗಂಭೀರ ಗಾಯಗೊಂಡಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News