ಮಹಮ್ಮದ್ ಅನೀಸ್ - ಮರಿಯಮತ್ ಹಮೀದ ಮತ್ತು ಮೂಸಾ ಕಲೀಮ್ - ಫಾತಿಮತ್ ಅಫ್ರಿದಾ

Update: 2015-12-31 16:07 GMT

ಮಂಗಳೂರು ತಾಲೂಕಿನ ಕಿನ್ಯದ ಕುತುಬಿನಗರದ ಹಾಜಿ ಕೆ ಎಸ್ ಮೂಸಕುಂಞಿ ರವರ ಪುತ್ರ ಮಹಮ್ಮದ್ ಅನೀಸ್ ರವರು, ಮಂಗಳೂರು ತಾಲೂಕಿನ ಬೆಳ್ಮ ಗ್ರಾಮದ ಕಣಕೂರು ಮನೆಯ ಅಬ್ದುಲ್ ಕರೀಮ್ - ಝುಲೈಖಾ ದಂಪತಿಯ ಪುತ್ರಿ ಮರಿಯಮತ್ ಹಮೀದರವರನ್ನು ಮತ್ತು

ಬಂಟ್ವಾಳ ತಾಲೂಕಿನ ವಿಜಯ ನಗರ ಸೇರಾಜೆಯ ದಿ. ಅಬ್ದುಲ್ ಖಾದರ್ ಮುಸ್ಲಿಯಾರ್-ಝೈನಬಾ ದಂಪತಿಯ ಪುತ್ರ, ಪತ್ರಕರ್ತ ಮೂಸಾ ಕಲೀಮ್, ಮಂಗಳೂರು ತಾಲೂಕಿನ ಬೆಳ್ಮ ಗ್ರಾಮದ ಕಣಕೂರು ಮನೆಯ ಅಬ್ದುಲ್ ಕರೀಮ್ - ಝುಲೈಖಾ ದಂಪತಿಯ ಪುತ್ರಿ ಫಾತಿಮತ್ ಅಫ್ರಿದಾರನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಹಾಲ್‌ನಲ್ಲಿ 2015ರ ಡಿ.31ರ ಗುರುವಾರ ನಡೆದ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಶುಭ ಘಳಿಗೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸಹಿತ ಹಲವು ಗಣ್ಯರು ಸಾಕ್ಷಿಯಾದರು.
 

ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News