ಸಾಹಿತ್ಯ-ಸಾಂಸ್ಕೃತಿಕ

Update: 2015-12-31 18:45 GMT

ಬೆಳಗೊಳದಲ್ಲಿ ಅಖಿಲ ಭಾರತ 81ನೆ ಕನ್ನಡ ಸಾಹಿತ್ಯ ಸಮ್ಮೇಳನಫೆ.1: ಜೈನಕಾಶಿ ಶ್ರವಣಬೆಳಗೊಳದಲ್ಲಿ ಅಖಿಲ ಭಾರತ 81ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ವರ್ಣರಂಜಿತ ಚಾಲನೆ ದೊರೆಯಿತು. ಕೆಂಪೇಗೌಡ ಪ್ರಶಸ್ತಿ
ಎ.4: ಹಿರಿಯ ಸಾಹಿತಿ ಡಾ.ಸಾ.ಶಿ.ಮರುಳಯ್ಯ ಹಾಗೂ ಜಿ.ಎಸ್.ಸಿದ್ದರಾಮಯ್ಯ ಸೇರಿದಂತೆ 91ಮಂದಿ 2015-16ನೆ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರಕವಿ ಬೇಡ: ಸರಕಾರಕ್ಕೆ ಆಯ್ಕೆ ಸಮಿತಿ ಶಿಫಾರಸು
ಮೇ.8: ರಾಷ್ಟ್ರಕವಿ ಅಭಿದಾನ ಇತ್ಯಾದಿ ಪುರಸ್ಕಾರಗಳನ್ನು ಸಂವಿಧಾನ ಜಾರಿಯಲ್ಲಿರುವ ಗಣತಂತ್ರ ರಾಜ್ಯದಲ್ಲಿ ನೀಡಬಾರದು ಎಂದು ಹಿರಿಯ ಲೇಖಕ ಹಾಗೂ ನಿವೃತ್ತ ನ್ಯಾ.ಡಾ.ಕೋ.ಚನ್ನಬಸಪ್ಪ ನೇತೃತ್ವದ ರಾಷ್ಟ್ರಕವಿ ಆಯ್ಕೆ ಸಮಿತಿ ಸರಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News