ಕೆ.ದಾವೂದ್

Update: 2016-02-13 17:36 GMT

ಮಂಗಳೂರು, ಫೆ. 13: ನಗರದ ಮಾರ್ನಮಿಕಟ್ಟ ನಿವಾಸಿ ಹಾಗೂ ಹಿಮಾಲಯ ಕನ್‌ಸ್ಟ್ರಕ್ಷನ್‌ನ ಮಾಲಕ ಕೆ. ದಾವೂದ್ (73) ಇಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಅವರು ಪತ್ನಿ, ಓರ್ವ ಪುತ್ರ ಹಾಗೂ ಆರು ಪುತ್ರಿಯರ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ತಿಂಗಳೀಚೆ ಅಸೌಖ್ಯದಿಂದ ಮನೆಯಲ್ಲೇ ಇದ್ದ ದಾವೂದ್ ಇಂದು ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದರೆಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಮಯ್ಯಿತ್ ನಮಾಝ್‌ದಾವೂದ್ ಅವರ ಮಯ್ಯಿತ್ ನಮಾಝ್ ರವಿವಾರ ಅಸರ್ ನಮಾಝಿನ ಬಳಿಕ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನೆರವೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ