ಕಾಡಾನೆ ತುಳಿತ: ಮಹಿಳೆ ಮೃತ್ಯು

Update: 2016-02-13 18:17 GMT

ಕುಶಾಲನಗರ, ಫೆ.13: ಇಲ್ಲಿಗೆ ಸಮೀಪದ ಗುಡ್ಡೆಹೂಸೂರು ಪಂಚಾಯತ್ ವ್ಯಾಪ್ತಿಯ ಬಸವನಹಳ್ಳಿ ಸಮೀಪದ ಹೊಸಕಾಡು ಗ್ರಾಮದಲ್ಲಿ ಕಾಡಾನೆ ತುಳಿತಕ್ಕೊಳಗಾಗಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ
ಕಾಳಮ್ಮ (55)ಕಾಡಾನೆ ತುಳಿತಕ್ಕೊಳಗಾಗಿ ಮೃತಪಟ್ಟ ಮಹಿಳೆ. ಇವರು ತಮ್ಮ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಶನಿವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ ಕಾಡಾನೆಯೊಂದು ತುಳಿದು ಸ್ಥಳದಲ್ಲಿಯೇ ಕೊಂದು ಹಾಕಿದೆ.
ಸ್ಥಳಕ್ಕೆ ಆರ್‌ಎಫ್‌ಒ ಚಿಣ್ಣಪ್ಪ, ವನಪಾಲಕರಾದ ಶಿವರಾಂ ಮತ್ತು ಅಯ್ಯಪ್ಪ ಭೆೇಟಿ ನೀಡಿ ಮಹಿಳೆಯ ಮೃತದೇಹವನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಮನೆಯವರಿಗೆ ಒಪ್ಪಿಸಿದ್ದಾರೆ.
ಮೃತರು ಎರಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಕೊಡಗು ಜಿಲ್ಲಾ ಡಿಎಫ್‌ಒ ಏಳುಕೊಂಡಲ ಭೇಟಿ ನೀಡಿ ಶನಿವಾರ ಮತ್ತು ರವಿವಾರ ಸರಕಾರಿ ರಜೆ ಇರುವುದರಿಂದ ಸೋಮವಾರದ ನಂತರ ಸರಕಾರದ ವತಿಯಿಂದ ದೊರೆಯುವ ಪರಿಹಾರವನ್ನು ಕೊಡಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News