ಸಂಶುದ್ದೀನ್ ಯಮಾನಿ- ಅರ್ಶಿದಾ ಬಾನು, ಅಬ್ದುಲ್ ಕರೀಂ-ಆಬಿದಾ

Update: 2016-02-28 08:10 GMT

ವಿಟ್ಲ : ಪುಣಚ-ನಾಟಕಲ್ ನಿವಾಸಿ ದಿವಂಗತ ಇಬ್ರಾಹಿಂ ಹಾಗೂ ಮರಿಯಮ್ಮ ದಂಪತಿಗಳ ಪುತ್ರ, ತೋಡಾರು ಸಂಶುಲ್ ಉಲಮಾ ಅರಬಿಕ್ ಕಾಲೇಜು ಪ್ರೊಫೆಸರ್ ಸಂಶುದ್ದೀನ್ ಯಮಾನಿ ಹಾಗೂ ಅಬ್ದುಲ್ ಕರೀಂ ಅವರ ವಿವಾಹವು ಕಬಕ ಮಸೀದಿ ಹಾಲ್‌ನಲ್ಲಿ ಗುರುವಾರ (ಫೆ 25) ನಡೆಯಿತು. ವಿವಾಹ ಸಮಾರಂಭದಲ್ಲಿ ಮಾಹಿನ್ ಉಸ್ತಾದ್ ತೊಟ್ಟಿ, ತೋಡಾರು ಸಂಶುಲ್ ಉಲಮಾ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಉಸ್ಮಾನ್ ಫೈಝಿ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಇಸ್ಮಾಯಿಲ್ ನಾಟೆಕಲ್ಲು, ಎಂ.ಎಸ್. ಹಮೀದ್ ಪುಣಚ ಸಹಿತ ಹಲವಾರು ಗಣ್ಯರು, ಬಂಧು-ಮಿತ್ರರು ಭಾಗವಹಿಸಿದ್ದರು. ಇದೇ ವೇಳೆ ತೋಡಾರ್ ಶಂ-ಎ-ಮದೀನಾ ಬುರ್‌ದಾ ತಂಡದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಸಂಶುದ್ದೀನ್ ಯಮಾನಿ ಅವರು ತೋಡಾರು ನಿವಾಸಿ ಮುಹಮ್ಮದ್ ಅವರ ಪುತ್ರಿ ಅರ್ಶಿದಾ ಬಾನು ಹಾಗೂ ಅಬ್ದುಲ್ ಕರೀಂ ಅವರು ಸವಣೂರು ನಿವಾಸಿ ಮೋನು ಬ್ಯಾರಿ ಅವರ ಪುತ್ರಿ ಆಬಿದಾ ಎಂಬವರನ್ನು ವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News