ಕಲಿಯುಗದ ರಾಮ ಮೋದಿ, ಮಾಡುತ್ತಿದ್ದಾರೆ ಅಸುರರ ನಾಶ: ಸಾಕ್ಷಿ ಮಹಾರಾಜ್

Update: 2016-04-26 06:06 GMT

ಲಕ್ನೊ,ಎಪ್ರಿಲ್ 26: ಭಾರತೀಯ ಜನತಾ ಪಕ್ಷದ ಬೆಂಕಿ ಚೆಂಡು ಸಾಕ್ಷಿ ಮಹಾರಾಜ್‌ರು ಪ್ರಧಾನಿ ನರೇಂದ್ರ ಮೋದಿಯವರನ್ನು ಭಗವಾನ್ ರಾಮಗೆ ಹೋಲಿಕೆ ಮಾಡಿದ್ದಾರೆ. ರವಿವಾರ ಸಾಕ್ಷಿ ಮಹಾರಾಜ್ ಪಿಎಂ ಮೋದಿಯನ್ನು ಕಲಿಯುಗದ ರಾಮ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಉನ್ನಾವ್‌ನ ಬಿಜೆಪಿ ಸಂಸದರೂ ಆಗಿರುವ ಸಾಕ್ಷಿ ಮಹಾರಾಜ್ ಯಾವರೀತಿಯಲ್ಲಿ ತ್ರೇತಾ ಯುಗದಲ್ಲಿ ಭಗವಾನ್ ರಾಮ ಭೂಮಿಯಲ್ಲಿ ರಾಕ್ಷಕರನ್ನು ನಾಶಮಾಡಿದ್ದಾನೋ ಅದೇರೀತಿ ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ರಾಕ್ಷಸರನ್ನು ನಾಶ ಮಾಡುವ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆಂದು ಹೇಳಿದ್ದಾರೆ.

ನನಗೆ ಭರವಸೆ ಇದೆ ಮೋದಿ ಭೂಮಿಯಲ್ಲಿರುವ ರಾಕ್ಷಕರನ್ನು ನಾಶ ಮಾಡುವರು ಎಂದು ಎಂದ ಸಾಕ್ಷಿ ಮಹಾರಾಜ್ ಭಾರತ ಮಾತಾಕಿ ಜೈ ಘೋಷಣೆಯ ವಿವಾದದ ಕುರಿತು ಕೆಲವರು ಭಾರತ ಮಾತಾಕಿ ಜೈ ಎನ್ನುವುದಿಲ್ಲ ಆದರೆ ಭಾರತ್ ಮಾತೆಯ ಹೆಸರನ್ನು ಹೇಳುತ್ತಾರೆ. ಅವರು ಭಾರತ್ ಮಾತಾ ಎನ್ನುವುದಾದರೆ ಜೈ ಎಂದು ಯಾಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News