ಬಿಗಡಾಯಿಸಿದ ಕನ್ಹಯ್ಯ ಆರೋಗ್ಯ
Update: 2016-05-05 11:42 GMT
ಹೊಸದಿಲ್ಲಿ, ಮೇ 5: ಕಳೆದೊಂದು ವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರ ಆರೋಗ್ಯ ಗುರುವಾರ ತೀವ್ರ ಬಿಗಡಾಯಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಕನ್ಹಯ್ಯ ಪರಿಸ್ಥಿತಿ ಚೆನ್ನಾಗಿಲ್ಲ. ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ. ಅವರ ಅಂಗಾಂಗಗಳಿಗೆ ಆಂತರಿಕ ಹಾನಿ ಆಗಿರುವ ಸಾಧ್ಯತೆ ಇದೆ ‘ ಎಂದು ಅವರ ಸ್ನೇಹಿತ ಹಾಗೂ ಅವರ ಜೊತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಉಮರ್ ಖಾಲಿದ್ ಹೇಳಿದ್ದಾರೆ.
‘ಅವರ ಪರಿಸ್ಥಿತಿ ಹೀಗೆ ಮುಂದುವರಿದರೆ ಆಂತರಿಕ ರಕ್ತಸ್ರಾವವಾಗುವ ಸಾಧ್ಯತೆ ಇದೆ’ ಎಂದು ವೈದ್ಯರು ಎಚ್ಚರಿಸಿದ್ದಾರೆ ಎಂದು ಅವರ ಇನ್ನೊಬ್ಬ ಸ್ನೇಹಿತ ಹೇಳಿದ್ದಾರೆ.
ಇಂದು ಬೆಳಗ್ಗೆ ಉಮರ್ ಹಾಗು ಕನ್ಹಯ್ಯ ವಾಂತಿ ಮಾಡಲು ಪ್ರಾರಂಭಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.