ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ

Update: 2016-05-24 05:48 GMT

ಬೆಂಗಳೂರು, ಮೇ 24: ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು  ಸಚಿವ ಸಂಪುಟದ ಸಹದ್ಯೋಗಿಗಳು , ಮೇಯರ‍್, ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮಂಗಳವಾರ ಬೆಳಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದರು.
ಮುಖ್ಯಮಂತ್ರಿಯ ನಗರ ಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸಚಿವರಾದ ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌, ರಾಮಲಿಂಗೇ ರೆಡ್ಡಿ ಮತ್ತಿತರ ಸಚಿವರುಗಳು , ಮೇಯರ್‌, ಉಪಮೇಯರ್‌, ವಿವಿಧ ಇಲಾಖಾ ಅಧಿಕಾರಿಗಳು ಸಾಥ್‌ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ  ಮೂರು ವೋಲ್ವೊ ಬಸ್‌ಗಳಲ್ಲಿ ಸಿಎಂ ದಂಡು ನಗರ ಪ್ರದಕ್ಷಿಣೆ ಹೊರಟಿದೆ.. ಬಿಬಿಎಂಪಿ ಚುನಾವಣೆಯ ಬಳಿಕ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ.
 ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಮಳೆಗಾಲ  ಆರಂಭ ಹಿನ್ನೆಲೆ ಪೂರ್ವ ತಯಾರಿ, ಫ್ಲೈ ಓವರ್‌  ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News