ಎಫ್ ಬಿ ಪೋಸ್ಟ್ ನಲ್ಲಿ ಟೈಮ್ಸ್ ನೌ ಅರ್ನಬ್ ರನ್ನು ಹಿಗ್ಗಾಮುಗ್ಗಾ ಝಾಡಿಸಿದ ಬರ್ಖಾ ದತ್ತ್

Update: 2016-07-27 10:45 GMT

ನವದೆಹಲಿ : ಭಾರತದ ಕೆಲವೊಂದು ಮಾಧ್ಯಮಗಳ ಬಾಯ್ಮುಚ್ಚಿಸಬೇಕೆಂದು ಹೇಳಿದ ಟೈಮ್ಸ್ ನೌ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.

ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಬರ್ಖಾ ತಮ್ಮ ಮಾಜಿ ಸಹೋದ್ಯೋಗಿ ಅರ್ನಬ್ ಬಗ್ಗೆ ಹೀಗೆ ಬರೆದಿದ್ದಾರೆ ‘‘ಮಾಧ್ಯಮ ಹಾಗೂ ಪತ್ರಕರ್ತರ ಬಾಯಿ ಮುಚ್ಚಿಸಬೇಕೆಂದು ಹಾಗೂ ಅವರ ವಿಚಾರಣೆ ನಡೆಸಿ ಅವರನ್ನು ಶಿಕ್ಷಿಸಬೇಕೆಂದುಟೈಮ್ಸ್ ನೌ ಹೇಳುತ್ತಿದೆ. ಈ ಮನುಷ್ಯ ಪತ್ರಕರ್ತನೇನು ? ಆತನದೇ ವೃತ್ತಿಯಲ್ಲಿರುವವಳು ನಾನೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತಿದೆ. ಆತ ಪಾಕ್ ಪರ ಡೋವ್ಸ್ ಗಳ ಬಗ್ಗೆ ಮಾತನಾಡುತ್ತಾರಾದರೂ ಸರಕಾರದ ಬಗ್ಗೆ ಮೌನವಾಗಿದ್ದಾರೆ. ಚಮಚಾಗಿರಿಯೇನು ?’’ಎಂದು ಬರ್ಖಾ ಪ್ರಶ್ನಿಸಿದ್ದಾರೆ.
‘‘ಪತ್ರಕರ್ತನೊಬ್ಬ ಸರಕಾರಕ್ಕೆ ಕೆಲ ಮಾಧ್ಯಮಗಳನ್ನು ಮುಚ್ಚಲು ಹೇಳುವುದು ಹಾಗೂ ಅವರನ್ನು ಐಎಸ್ ಏಜಂಟರು ಹಾಗೂ ಉಗ್ರರ ಬೆಂಬಲಿಗರೆನ್ನುವುದನ್ನು ಊಹಿಸಿಕೊಳ್ಳಿ. ಮಿಸ್ಟರ್ ಗೋಸ್ವಾಮಿ ನೀವುನೇರವಾಗಿ ಹಾಗೂ ಪರೋಕ್ಷವಾಗಿ ನನ್ನ ಹೆಸರನ್ನು ಎಷ್ಟೇ ಬಾರಿ ನಿಮ್ಮ ಶೋ ದಲ್ಲಿ ಎತ್ತಿದರೂ ನಾನು ಅದಕ್ಕೆ ಕ್ಯಾರೇ ಎನ್ನುವುದಿಲ್ಲ,’’ ಎಂದು ಬರ್ಖಾ ಬರೆದಿದ್ದಾರೆ.
ಬಲಪಂಥೀಯರ ಬೆಂಬಲಕ್ಕೆ ತಮ್ಮ ಚಾನೆಲ್ ಮುಖಾಂತರ ಅರ್ನಬ್ ನಿಂತಿದ್ದಾರೆಂಬ ಆರೋಪ ಅವರ ಮೇಲೆ ಆಗಾಗ ಕೇಳಿ ಬಂದಿದ್ದು ಮಂಗಳವಾರ ರಾತ್ರಿ ಅವರು ಕಾಶ್ಮೀರ ವಿಷಯದ ಬಗ್ಗೆ ಚರ್ಚೆ ನಡೆಸಿದ್ದರಲ್ಲದೆ ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸುವ ಬರ್ಖಾ ಮತ್ತು ಇತರ ಪತ್ರಕರ್ತರನ್ನು ಪರೋಕ್ಷವಾಗಿ ಉಲ್ಲೇಖಿಸುವಪ್ರೋಪಾಕ್‌ಡೋವ್ಸ್‌ಸೈಲೆಂಟ್ ಎಂಬ ಹ್ಯಾಶ್ ಟ್ಯಾಗ್ ಕೂಡ ಟ್ವಿಟ್ಟರ್ ನಲ್ಲಿ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News