ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಡೇವಿಡ್‌ ಎಸ್ಕೇಪ್‌

Update: 2016-08-31 05:21 GMT

ಬೆಂಗಳೂರು,ಆ.31: ಇಲ್ಲಿನ ಪರಪ್ಪನ  ಅಗ್ರಹಾರ ಜೈಲಿನಿಂದ ಕೈದಿ ಡೇವಿಡ್‌  ಎಂಬಾತ ಇಂದು ಬೆಳಗ್ಗೆ  ಪರಾರಿಯಾಗಿದ್ದಾನೆ.
 ಮುಂಜಾನೆ 4 ಗಂಟೆ ಸಮಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡ ಡೇವಿಡ್‌   ತರಕಾರಿ ವಾಹನದಲ್ಲಿ  ಪರಾರಿಯಾಗಿದ್ದಾನೆ  ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಭದ್ರತೆ ಹೊಂದಿರುವ ಪರಪ್ಪನ ಅಗ್ರಹಾರದಿಂದ  2 ವರ್ಷಗಳ ಹಿಂದೆ ಸೈಕೋಪಾಥ್  ಜೈಶಂಕರ್ ಕಾಂಪೌಡ್ ಜಿಗಿದು ಪರಾರಿಯಾಗಿದ್ದನು. ಬಳಕ ಅವನನ್ನು ಬಂಧಿಸಲಾಗಿತ್ತು. ಆ ಬಳಿಕ   ಇದು ಎರಡನೇ ಪ್ರಕರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News