ನಾರಾಯಣ ಮೂಲ್ಯ
Update: 2016-10-05 18:48 GMT
ಕೊಣಾಜೆ, ಅ.5: ಪಜೀರು ಗ್ರಾಮದ ಕಂಬಳಪದವಿನಲ್ಲಿ ವಾಸವಾಗಿದ್ದ ಅಬೆಮಾರು ನಾರಾಯಣ ಮೂಲ್ಯ(94) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಅವರು ಕುರ್ನಾಡುವಿನ ಶ್ರೀ ದತ್ತಾತ್ರೆಯ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ. ಮಾಜಿ ಜಿಪಂ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಮಾಜಿ ತಾಪಂ ಸದಸ್ಯ ಉಮರ್ ಪಜೀರು ಮೃತರ ಅಂತಿಮ ದರ್ಶನ ಪಡೆದರು.