ಚಿರತೆ ಕೊಂದು,ರುಂಡ ಕಾಲುಗಳನ್ನು ಕಳವುಗೈದ ಆರೋಪಿ ಬಂಧನ

Update: 2016-11-30 17:40 GMT

 ಅಂಕೋಲಾ, ನ.30: ಕುಮಟಾ ತಾಲೂಕಿನ ಹಿರೇಗುತ್ತಿ ವಲಯ ಅರಣ್ಯ ವ್ಯಾಪ್ತಿಯ ತಾಲೂಕಿನ ಗುಂಡಬಾಳ ಸಮೀಪದ ಅರಣ್ಯ ಪ್ರದೇಶದಲ್ಲಿ ನ.25 ರಂದು ಕಪ್ಪು ಚಿರತೆಯ ರುಂಡ ಹಾಗೂ ಕಾಲುಗಳನ್ನು ಕಳವುಗೈದ ಆರೋಪಿಗೆ ನ್ಯಾಯಾಲಯ ಡಿ.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಗುಂಡಬಾಳ ಗ್ರಾಮದ ನೆವಳ್ಸೆಯ ಅರುಣ ಮಂಕಾಳು ಗೌಡ ಅಲಿಯಾಸ್ ಬುದ್ದು(19) ಎಂಬವನೇ ಬಂಧಿತ ಆರೋಪಿಯಾಗಿದ್ದು,ಆತನಿಂದ ಚಿರತೆಯ ಚಿರತೆ ಹತ್ಯೆಗೆ ಬಳಿಸಿದ ಕತ್ತಿ ಹಾಗೂ ಸಾಗಣೆಗೆ ಬಳಿಸಿದ ಚೀಲವನ್ನು ವಶಪಡಿಸಿಕೊಂಡಿದ್ದಾರೆ 


ಈ ಕೃತ್ಯ ವೆಸಗಿದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮತ್ತು ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ.ನಾಯ್ಕಿ ಮಾರ್ಗದರ್ಶನದಲ್ಲಿ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಮೋಹನ ಬಿದರಿ ನೇತೃತ್ವದಲ್ಲಿ ಮೂರು ತಂಡಗಳಾಗಿ ರಚಿಸಿ ಆರೋಪಿ ಅರುಣ ಗೌಡನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News