ಕಪ್ಪು ಹಣ ಬಿಳಿ ಮಾಡುವ ದಂಧೆ: ಓರ್ವ ಆರ್‌ಬಿಐ ಅಧಿಕಾರಿ ಸೆರೆ!

Update: 2016-12-13 07:43 GMT

ಬೆಂಗಳೂರು, ಡಿ.13: ಕಪ್ಪು ಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಆರ್‌ಬಿಐನ ವಿಶೇಷ ಸಹಾಯಕ ಅಧಿಕಾರಿಯೊಬ್ಬರನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಂಗಳವಾರ ಸಿಬಿಐ ಬಂಧಿಸಿದೆ.

ಆರ್‌ಬಿಐ ಅಧಿಕಾರಿ ಕೆ. ಮೈಕಲ್ ಕೊಳ್ಳೇಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ಸೇರಿದ್ದ 1.51 ಕೋಟಿ ರೂ. ಕಪ್ಪು ಹಣವನ್ನು ಬಿಳಿ ಮಾಡಲು ಯತ್ನಿಸಿದ್ದ ಎಂದು ವರದಿಯಾಗಿತ್ತು. ಪ್ರಕರಣದ ಸಂಬಂಧ ಮೈಕಲ್ ಜೊತೆಗಿದ್ದ ಇನ್ನಿಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಸಿಬಿಐ ಅವರಿಂದ 17 ಲಕ್ಷ ರೂ. ಜಪ್ತಿ ಮಾಡಿ ತೀವ್ರ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News