ವೃತ್ತಿ ಕೌಶಲ ತರಬೇತಿ ನೀಡಲು ಅರ್ಜಿ ಆಹ್ವಾನ

Update: 2017-01-16 14:03 GMT

ಮಂಗಳೂರು, ಜ.16: ದ.ಕ. ಜಿಲ್ಲೆಯಲ್ಲಿ ಈ ಹಿಂದೆ ನವಸಾಕ್ಷರರಾಗಿ ಗುರುತಿಸಲ್ಪಟ್ಟವರಿಗಾಗಿ ಗೃಹಬಳಕೆ ವಸ್ತುಗಳ ತಯಾರಿಕೆ, ಅಗರಬತ್ತಿ, ಲಿಕ್ವಿಡ್‌ಸೋಪ್, ಸೋಪ್ ತಯಾರಿಕೆ ಇತ್ಯಾದಿಗಳ ಕುರಿತು ತರಬೇತಿ ನೀಡಲಾಗುತ್ತದೆ. ಪ್ರತಿ ಶಿಬಿರಕ್ಕೆ 20 ಜನ ನವಸಾಕ್ಷರರಂತೆ 1 ತಿಂಗಳ ಅವಧಿಯಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ವಿಧವೆ, ವಿಕಲಚೇತನ ನವಸಾಕ್ಷರರಿಗೆ ಆದ್ಯತೆ ನೀಡಬೇಕಾಗಿದೆ. ಆಯ್ಕೆಯಾದವರಿಗೆ ದಿನಾ 2 ಗಂಟೆಯಂತೆ 30 ದಿನಗಳ ವೃತ್ತಿ ಕೌಶಲ ತರಬೇತಿ ಶಿಬಿರ ನೀಡಬೇಕಾಗಿದೆ.

ಆಸಕ್ತ ಸಂಸ್ಥೆಗಳು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ದ.ಕ.ಜಿಪಂ ಕಟ್ಟಡ, ಅಶೋಕನಗರ ಮಂಗಳೂರು ದ.ಕ. (ದೂ.ಸಂ.: 08242451233 ಅಥವಾ ಮೊ.ಸಂ: 9449488836)ಗೆ ಸಲ್ಲಿಸಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News