ಸದಾನಂದ ಭಟ್

Update: 2017-01-22 18:50 GMT

ಮೂಡುಬಿದಿರೆ, ಜ.22: ಹಿರಿಯ ಸಮಾಜ ಸೇವಕ ಪಿ.ಸದಾನಂದ ಭಟ್ (87) ರವಿವಾರ ಬೆಳಗ್ಗಿನ ಜಾವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.

ಅವಿವಾಹಿತರಾಗಿದ್ದ ಅವರು ಸಹೋದರ ಪಿ.ವಿಶ್ವನಾಥ ಭಟ್ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೂಡುಬಿದಿರೆಯ ಸಮಾಜ ಮಂದಿರದ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿ, ಶ್ರೀ ಮಹಾವೀರ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಮಹಾವೀರ ಕಾಲೇಜು, ಎಸ್.ಎನ್.ಎಂ.ಪಾಲಿಟೆಕ್ನಿಕ್, ಎ.ಜೆ.ಸೋನ್ಸ್ ಐ.ಟಿ.ಐ, ಎಂ.ಕೆ.ಅನಂತ್ರಾಜ್ ಸಿ.ಪಿ.ಎಡ್. ಕಾಲೇಜಿನ ಕೋಶಾಕಾರಿಯಾಗಿ, ವಿದ್ಯಾವರ್ಧಕ ಸಂಘದ ಕೋಶಾಕಾರಿಯಾಗಿ, ಬಾಬುರಾಜೇಂದ್ರ ಪ್ರೌಢಶಾಲೆಯ ಸ್ಥಾಪನೆಗೆ ಕಾರಣರಾಗಿದ್ದ ಅವರು ಸಮಾಜ ಮಂದಿರದ ಮೂಲಕ ಪೇಟೆಯ ಮೊದಲ ವಾಣಿಜ್ಯ ಸಂಕೀರ್ಣವನ್ನು ತೆರೆಯುವಲ್ಲಿ ಶ್ರಮಿಸಿದ್ದರು. *ಸಂತಾಪ: ಪಿ.ಎಸ್.ಭಟ್ ನಿಧನದ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲಿ ಹೆಚ್ಚಿನ ಔಷಧ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಗೌರವ ಸಲ್ಲಿಸಿದರು.

ಇದೇ ವೇಳೆ ಮಹಾವೀರ ಕಾಲೇಜಿನ ಸ್ಥಾಪಕ ಸದಸ್ಯರಾಗಿದ್ದ ಪಿ.ಎಸ್.ಭಟ್ ಗೌರವಾರ್ಥ ಮಹಾವೀರ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೋಮವಾರ ಬೆಳಗ್ಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು ಬಳಿಕ ರಜೆ ಘೋಷಣೆ ಮಾಡಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ