ಮಾಲೂರು: ಹಣದ ಆಸೆಗೆ ಮೊಮ್ಮಗನಿಂದ ಅಜ್ಜಿಯ ಕೊಲೆ
Update: 2017-03-21 04:31 GMT
ಮಾಲೂರು, ಮಾ.21: ಹಣದ ಆಸೆಗಾಗಿ ಮೊಮ್ಮಗನೋರ್ವ ಅಜ್ಜಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೋಲಾರದ ಮಾಲೂರಿನ ಇರಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೀತಮ್ಮ(70) ಕೊಲೆಯಾದವರು. ಮೋಹನ್ ಕೃಷ್ಣ ಅಲಿಯಾಸ್ ಲಾಲು(19) ಕೊಲೆ ಮಾಡಿ ಪರಾರಿಯಾದ ಯುವಕ.
ಸೀತಮ್ಮ ಸಣ್ಣ ಪುಟ್ಟ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಹಣ ಲಪಟಾಯಿಸಲು ಹೊಂಚು ಹಾಕುತ್ತಿದ್ದ ಮೋಹನ್ ಕೃಷ್ಣ ಮಂಗಳವಾರ ಬೆಳಗ್ಗೆ ಸೀತಮ್ಮಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.