ಸಹಾಯಧನಕ್ಕೆ ಅರ್ಜಿ ಆಹ್ವಾನ

Update: 2017-04-21 14:31 GMT

ಉಡುಪಿ, ಎ.21: 2017-18ನೆ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಸಹಾಯಧನ ನೀಡಲು ಅರ್ಹ/ಆಸಕ್ತ ರೈತರು/ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಸಣ್ಣ ಸಸ್ಯಾಗಾರ, ಬಾಳೆ ಪ್ರದೇಶ ವಿಸ್ತರಣೆ(ಕಂದುಗಳು ಮತ್ತು ಅಂಗಾಂಶ ಕೃಷಿ), ಕಾಳುಮೆಣಸು ಪ್ರದೇಶ ವಿಸ್ತರಣೆ, ಕೋಕೊ ಪ್ರದೇಶ ವಿಸ್ತರಣೆ, ಗೇರು ಪುನಃಶ್ಚೇತನ, ಕಾಳುಮೆಣಸು ಪುನಃಶ್ಚೇತನ, ಕೃಷಿ ಹೊಂಡ(20x20x3 ಘ.ಮೀ.), ಹಸಿರು ಮನೆ, ನೆರಳು ಪರದೆ, ಸಮಗ್ರ ಪೀಡೆ/ಪೋಶಕಾಂಶ ನಿರ್ವಹಣೆ, ಜೇನು ಸಾಕಣೆ ಹಾಗೂ ಜೇನು ಸಂಗ್ರಹಣಾ ಉಪಕರಣ, 20 ಅಶ್ವಶಕ್ತಿ ವರೆಗಿನ ಟ್ರ್ಯಾಕ್ಟರ್, ತರಬೇತಿ/ಪ್ರವಾಸ, ಪ್ಯಾಕ್ ಹೌಸ್, ಪ್ರಾಥಮಿಕ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ, ಹಣ್ಣು ಮಾಗಿಸುವ ಘಟಕ ಯೋಜನೆಯಡಿ ಆಸಕ್ತ ರೈತರು ಹೊಸ ಪಹಣಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಅರ್ಜಿಯನ್ನು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಸಲ್ಲಿಸಿ ದಾಖಲು ಮಾಡಲು ಕೋರಿದೆ. ಅರ್ಜಿಗಳನ್ನು ಯೋಜನೆಯ ಮಾರ್ಗಸೂಚಿ ಹಾಗೂ ಜೇಷ್ಟತೆಯ ಅಧಾರ ದಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಎ.30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಉಡುಪಿ, ದೂರವಾಣಿ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಉಡುಪಿ ದೂರವಾಣಿ: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕುಂದಾಪುರ ದೂರವಾಣಿ: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಕಳ ದೂರವಾಣಿ:08258-230288ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News