ಬೆಂಕಿ ನಂದಿಸಲು ಹೋದ ರೈತ ಬೆಂಕಿಗಾಹುತಿ

Update: 2017-04-23 06:40 GMT

ಮುಂಡಗೋಡ, ಎ.23: ಬೆಂಕಿ ನಂದಿಸಲು ಹೋದ ರೈತನೇ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ನಡೆದಿದೆ.

ಇಂದೂರ ಗ್ರಾಮದ ಸುಭಾಸ ಫಕ್ಕಿರಯ್ಯ ಇಳಿಗೇರ (70) ತನ್ನ ಜಮೀನಿನಲ್ಲಿ ಒಣಗಿದ ಗೋವಿನಜೋಳದ ಗಿಡಗಳನ್ನು ಸ್ವಚ್ಛಮಾಡಿ ಕಸದ ರಾಶಿಗೆ ಬೆಂಕಿ ಹಚ್ಚಿದ್ದರು. ಗಾಳಿಯ ರಭಸಕ್ಕೆ ಬೆಂಕಿಯು ಪಕ್ಕದ ಜಮೀನಿನ ಬಾಳೆ ತೋಟಕ್ಕೆ ತಗಲಿದ್ದು, ಇದರಿಂದ ಗಾಬರಿಗೊಂಡ ಫಕ್ಕಿರಯ್ಯ ಬೆಂಕಿ ನಂದಿಸಲು ತೆರಳಿದ್ದಾರೆ. ಈ ಸಂದರ್ಭ ಆಕಸ್ಮಿಕವಾಗಿ ಅವರಿಗೆ ಬೆಂಕಿ ತಗಲಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ರೈತ ಚೀರಾಡತೊಡಗಿದಾಗ ಧಾವಿಸಿದ ಸಾರ್ವಜನಿಕರು ಬೆಂಕಿ ನಂದಿಸಿ ಫಕ್ಕಿರಯ್ಯರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News