ನಾಗರಹಾವು ಕಚ್ಚಿ ರೈತ ಮೃತ್ಯು

Update: 2017-04-23 06:48 GMT

ಮುಂಡಗೋಡ, ಎ.23: ನಾಗರಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ರೈತನನ್ನು ಸಾಲಗಾಂವ ಗ್ರಾಮದ ಯಲ್ಲಪ್ಪ ಗೋವಿಂದಪ್ಪ ಹಾನಗಲ್(36) ಎಂದು ತಿಳಿದುಬಂದಿದೆ. ದನಕರುಗಳಿಗೆ ಸೊಪ್ಪು ಹಾಕುತ್ತಿದ್ದಾಗ ಸೊಪ್ಪಿನ ರಾಶಿಯಲ್ಲಿದ್ದ ನಾಗರಹಾವು ಕಚ್ಚಿತ್ತು. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News