ತೃಪ್ತಿಕರ ಫಲಿತಾಂಶ ಏಕಿಲ್ಲ?

Update: 2017-05-12 18:31 GMT

ಮಾನ್ಯರೆ,

ಮೊನ್ನೆಯ ಪಿಯುಸಿ ಫಲಿತಾಂಶದಲ್ಲಿ ಪ್ರತೀ ವರ್ಷದಂತೆ ಕರಾವಳಿ ಭಾಗವು ಮೇಲುಗೈ ಸಾಧಿಸಿದರೆ, ಉತ್ತರ ಕರ್ನಾಟಕದ ಜಿಲ್ಲೆಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ.
ಹಿಂದುಳಿದ ಜಿಲ್ಲೆಗಳ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂಬ ಮಾತು ಪ್ರತೀ ವರ್ಷ ಕೇಳಿ ಬರುತ್ತದೆ. ಆದರೆ ಫಲಿತಾಂಶ ಮಾತ್ರ ಸಿಗುತ್ತಿಲ್ಲ.
ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಸಂಬಂಧಿತರು ಇನ್ನಾದರೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಅಳವಡಿಸಿಕೊಂಡಿರುವ ಶೈಕ್ಷಣಿಕ ಸುಧಾರಣೆಗಳು ಯಾವುವೆಂಬುದನ್ನು ಅರಿತು ತಮ್ಮ ಜಿಲ್ಲೆಗಳಲ್ಲೂ ಅವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಅಂತಹ ಪ್ರಯತ್ನ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಾದರೂ ಉತ್ತಮ ಫಲಿತಾಂಶ ಬಂದೀತು.

Writer - -ಸೋಮನಾಥ ನಾಯಕ, ಗಂಗಾವತಿ

contributor

Editor - -ಸೋಮನಾಥ ನಾಯಕ, ಗಂಗಾವತಿ

contributor

Similar News