ಉಮರ್ ಮುಸ್ಲಿಯಾರ್

Update: 2017-05-16 04:43 GMT

ಉಪ್ಪಿನಂಗಡಿ, ಮೇ 16: ಇಲ್ಲಿನ ಮಠ ಮಸೀದಿಯಲ್ಲಿ ಮುಅಲ್ಲಿಂ ಆಗಿ ಸೇವೆ ಸಲ್ಲಿಸುತ್ತಿದ್ದ ಮರ್ದಾಳ ಪೆರ್ಗಡೆಮಾರು ನಿವಾಸಿ ಹಾಜಿ ಉಮರ್ ಮುಸ್ಲಿಯಾರ್ (55) ಹೃದಯಾಘಾತದಿಂದ ನಿಧನರಾದರು.

ಅವರು ಪಟ್ರಮೆ, ಮಲ್ಲೂರು, ಸಜಿಪ, ಸೂರಲ್ಪಾಡಿ, ಫೈಸಲ್‌ನಗರ, ಮಲ್ಲಿಗೆಮಜಲು, ಗಂಡಿಬಾಗಿಲು ಮತ್ತಿತರ ಕಡೆಗಳಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಉಪ್ಪಿನಂಗಡಿಯ ಮಠದಲ್ಲಿ ಮುಅಲ್ಲಿಂ ಆಗಿದ್ದರು.

ಅಡ್ಯಾರು ಕಣ್ಣೂರು ರೇಂಜ್ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ