ಶಿವಮೊಗ್ಗ ಜೈಲಿನಿಂದ ಕೈದಿ ಪರಾರಿ

Update: 2017-05-22 07:14 GMT

ಶಿವಮೊಗ್ಗ, ಮೇ 22: ಶಿವಮೊಗ್ಗ ಜೈಲ್ ನಿಂದ ವಿಚಾರಧೀನ ಕೈದಿಯೊಬ್ಬರು ರವಿವಾರ ಸಂಜೆ ಪರಾರಿಯಾಗಿದ್ದಾನೆ.
ಆಕ್ರಮವಾಗಿ ಬಾಂಗ್ಲಾದೇಶದಿಂದ ಬಂದಿದ್ದ  ಮುಹಮ್ಮದ್‌ ರಹಿಮಾನ್‌ ಹುಸೈನ್‌ ಎಂಬಾತನನ್ನು ಬಂಧಿಸಿ ಶಿವಮೊಗ್ಗ ಜೈಲಿನಲ್ಲಿರಿಸಲಾಗಿತ್ತು. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಆರೋಪಿ ಹುಸೈನ್‌ ಜೈಲಿನ ಕಂಪೌಂಡ್‌ ಗೋಡೆ ಹಾರಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ .  ಕೈದಿ ಪರಾರಿ ಪ್ರಕರಣದಲ್ಲಿ  ಜೈಲಿನ ಸಿಬ್ಬಂದಿಗಳ ಕೈವಾಡ ಇರುವ ಗುಮಾನಿ ವ್ಯಕ್ತವಾಗಿದೆ.
 ಕೈದಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜೈಲು ಸಿಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News