ಸರಕಾರಿ ಕಾರನ್ನು ವಾಪಾಸ್‌ ನೀಡಿದ ವೇಣುಗೋಪಾಲ್‌

Update: 2017-05-23 06:55 GMT

ಬೆಂಗಳೂರು, ಮೇ 23: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯ ಸರಕಾರ ಕೊಟ್ಟಿದ್ದ ಕಾರನ್ನು ವಾಪಾಸ್‌ ನೀಡಿದ್ದಾರೆ.
ಸರಕಾರದ ಸವಲತ್ತು ಬೇಡ ಎಂದಿರುವ ವೇಣುಗೋಪಾಲ್‌ ಅವರು ಕೆಪಿಸಿಸಿಯ ಇನೋವಾ ಕಾರನ್ನು ಬಳಸುತ್ತಿದ್ದಾರೆ.
ಈ ಹಿಂದೆ ವೇಣುಗೋಪಾಲ ರಾಜ್ಯಕ್ಕೆ ಆಗಮಿಸಿದಾಗ ಅವರ ಓಡಾಟಕ್ಕೆ ರಾಜ್ಯ ಸರಕಾರ ರ್ಚೂನರ್‌ ಕಾರನ್ನು ಒದಗಿಸಿತ್ತು. ಆದರೆ ಈ ಬಾರಿ ಸರಕಾರಿ ಕಾರು ನಿರಾಕರಿಸಿ, ಪಕ್ಷದ ಕಾರ್ಯಗಳಿಗೆ ಕೆಪಿಸಿಸಿ ಕಾರನ್ನು ಬಳಕೆ ಮಾಡಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News