ಲಾರಿಗೆ ಕಾರು ಡಿಕ್ಕಿ ಪ್ರಕರಣ; ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆ

Update: 2017-05-23 07:22 GMT

ಕಲ್ಬುರ್ಗಿ, ಮೇ 23: ಜೀವರ್ಗಿ ತಾಲೂಕಿನ ಮಂದೇವಾಲಾ ಎಂಬಲ್ಲಿ ಮೇ 21ರಂದು  ಮದು ಮಗಳನ್ನು ಕರೆದೊಯ್ಯುತ್ತಿದ್ದ ಕಾರೊಂದು  ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ  ಮೃತಪಟ್ಟವರ  ಸಂಖ್ಯೆ ಐದಕ್ಕೆ ಏರಿದೆ. 
  ಘಟನೆಯಲ್ಲಿ ಗಂಬೀರ ಗಾಯಗೊಂಡಿದ್ದ ಮದು ಮಗಳು ಜ್ಯೋತಿ (24) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
 ಈ ಘಟನೆಯಲ್ಲಿ ಷಣ್ಮುಖ್ (35) ಅಮೋಘ್ (25) , ಓಂಕಾರ್ (8), ಸೇರಿದಂತೆ ಮೂವರು ಸ್ಥಳದಲ್ಲೇ  ಮೃತಪಟ್ಟಿದ್ದರು. ಆದರೆ ಭೂಮಿಕಾ (5) ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಸಾವುಗೀಡಾಗಿದ್ದಳು.
ಗುಲ್ಬರ್ಗದ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮಕ್ಕೆ ತೆರಳುವಾಗ ಈ ದುರಂತ ಸಂಭವಿಸಿತ್ತು.
ವೇಗವಾಗಿ ಬರುತ್ತಿದ್ದ ಕಾರು ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು ಎಂದು ಹೇಳಲಾಗುತ್ತಿದೆ.. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News