ಶಿವಲಿಂಗ ಶೋಧಕ್ಕೆ ಹೆದ್ದಾರಿ ಅಗೆದ ಭೂಪ!

Update: 2017-06-07 04:21 GMT

ಹೈದರಾಬಾದ್, ಜೂ.7: ಶಿವಲಿಂಗ ಹುಡುಕಲು ಸಮೀಪದ ಗ್ರಾಮಸ್ಥನೊಬ್ಬ ಹೆದ್ದಾರಿಯನ್ನೇ ಅಗೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕನಸಿನಲ್ಲಿ ಕಾಣಿಸಿಕೊಂಡ ಶಿವ, ಈ ಸ್ಥಳದಲ್ಲಿ ಅಗೆದರೆ ಶಿವಲಿಂಗ ಸಿಗುತ್ತದೆ ಎಂದು ಹೇಳಿದ್ದಾನೆ ಎನ್ನುವುದು ಈತನ ಸಮರ್ಥನೆ. ಲಖನ್ ಮನೋಜ್ (30) ಎಂಬ ಈ ಸ್ವಯಂಘೋಷಿತ ಸ್ವಾಮಿಯನ್ನು ಬಂಧಿಸಲಾಗಿದೆ. ಈತ ಅರ್ಥ್‌ ಮೂವಿಂಗ್ ಮೆಷಿನ್ ಮೂಲಕ 15 ಅಡಿಯ ಹೊಂಡವನ್ನು ವಾರಂಗಲ್- ಹೈದಬಾರಾದ್ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಖ್ಯೆ 163ರಲ್ಲಿ ನಿರ್ಮಿಸಿದ್ದ.
ಈತನಿಗೆ ನೆರವಾದ ಆರೋಪದಲ್ಲಿ ಗ್ರಾಮದ ಸರಪಂಚ, ಪುರಸಭೆ ಉಪಾಧ್ಯಕ್ಷ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನಗಾಂವ್ ಜಿಲ್ಲೆಯ ಪೆಂಬರ್ತಿ ಎಂಬಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News