ಕರ್ನಾಟಕಕ್ಕೆ ಮುಂಗಾರು ಪ್ರವೇಶ

Update: 2017-06-07 12:20 GMT

ಬೆಂಗಳೂರು,ಜೂ.7: ಬಹು ನಿರೀಕ್ಷಿತ ಮುಂಗಾರು ಮಳೆ ಬುಧವಾರ ಕರ್ನಾಟಕವನ್ನು ಪ್ರವೇಶಿಸಿದೆ. ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಮುಂಗಾರು ಮಳೆಯ ಪ್ರವೇಶವನ್ನು ಇಂದು ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸಿದೆ.

ಸುದ್ದಿಗಾರರೊಡನೆ ಮಾತನಾಡಿದ ಐಎಂಡಿ-ಬೆಂಗಳೂರು ಪ್ರಭಾರ ನಿರ್ದೇಶಕ ಎಲ್.ರಮೇಶ ಬಾಬು ಅವರು, ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ. ಮಳೆಯ ಮುಂದುವರಿಕೆಗೆ ಗಾಳಿಯೂ ಪೂರಕವಾಗಿದ್ದು, ಇದು ಮುಂಗಾರು ಪ್ರವೇಶವನ್ನು ಸೂಚಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News