ಜರ್ಮನಿಯಲ್ಲಿ ಬಾಗಲಕೋಟೆಯ ವಿದ್ಯಾರ್ಥಿ ನಾಪತ್ತೆ

Update: 2017-06-22 05:52 GMT

ಬಾಗಲಕೋಟೆ, ಜೂ.21: ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಒಂದೂವರೆ ವರ್ಷಗಳ ಹಿಂದೆ ಎಂಎಸ್ ಕಲಿಯಲು ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ಸೀಮಿಕೇರಿಯ ನಿವಾಸಿ ಮಂಜುನಾಥ ಭಾನುವಾರದಿಂದ ಕುಟುಂಬದ ಸಂಪರ್ಕ ಕಳೆದುಕೊಂಡಿದ್ದಾರೆ. ಜರ್ಮನಿಯ ಹ್ಯಾಂಬರ್ಗ್ ನದಿಯ ದಡದಲ್ಲಿ ಮಂಜುನಾಥನ ಸೈಕಲ್, ಚಪ್ಪಲಿ ಹಾಗೂ ಕನ್ನಡದಲ್ಲಿ ಬರೆದಿರುವ ಪತ್ರವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈ ಕುರಿತು ಹ್ಯಾಂಬರ್ಗ್ ಪೊಲೀಸರು ಬಾಗಲಕೋಟೆ ಎಸ್ಪಿ ಸಿ.ಬಿ. ಋಷ್ಯಂತ್‌ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸರಕಾರದ ಧನಸಹಾಯದಿಂದ ಮಂಜುನಾಥ್ ಎರಡು ವರ್ಷಗಳ ಎಂಎಸ್ ಕೋರ್ಸ್ ಮಾಡಲು ಜರ್ಮನಿಗೆ ತೆರಳಿದ್ದರು. ಇತ್ತೀಚೆಗೆ ಊರಿಗೆ ಬಂದು ಹೋಗಿದ್ದರು ಎಂದು ಮಂಜುನಾಥರ ಮಾವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News