ಗೋವಾ: ಪ್ರಮೋದ್ ಮುತಾಲಿಕ್ ಗೆ ನಿಷೇಧ ಮುಂದುವರಿಕೆ
Update: 2017-07-01 09:43 GMT
ಪಣಜಿ,ಜು.1: ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ಗೆ ಗೋವಾ ಪ್ರವೇಶಿಸದಂತೆ ವಿಧಿಸಲಾದ ನಿಷೇಧವನ್ನು ಮುಂದಿನ 60ದಿವಸಗಳಿಗೆ ಮುಂದುವರಿಸಲಾಗಿದೆ. ಮುತಾಲಿಕ್ ಗೋವಾಕ್ಕೆ ಬಂದರೆ ಕಾನೂನುವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಬೆಟ್ಟುಮಾಡಿ 2014ರಲ್ಲಿ ಗೋವಾ ಪೊಲೀಸ್ ನೀಡಿದ ವರದಿಯ ಪ್ರಕಾರ ಮುತಾಲಿಕ್ಗೆ ನಿಷೇಧ ಹೇರಲಾಗಿತ್ತು.
2009ರಲ್ಲಿ ಮಂಗಳೂರಿನಲ್ಲಿಶ್ರೀರಾಮಸೇನೆ ಕಾರ್ಯಕರ್ತರು ಪಬ್ವೊಂದರಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿದ್ದರು. ಇದನ್ನು ಸಮರ್ಥಿಸಿಕೊಂಡಿದ್ದ ಮುತಾಲಿಕ್ ಮಹಿಳೆಯರು ಪಬ್ಗೆ ಹೋಗುವುದು ಭಾರತದ ಸಂಸ್ಕೃತಿಯಲ್ಲ ಎಂದು ಹೇಳಿದ್ದರು. ನಂತರ ಕರ್ನಾಟಕದಲ್ಲಿದ್ದ ಅಂದಿನ ಬಿಜೆಪಿ ಸರಕಾರ ಮುತಾಲಿಕ್ ಮಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿತ್ತು.